ಅವಳೀಗ ತಾಯಾಗಿದ್ದಾಳೆ

ಅದು ಬಳ್ಳಿಯಂತೆ
ಕಾಲಿಗೆ ತೊಡರುತ್ತಾ
ಭಯದಂತೆ
ಎದೆಯೊತ್ತಿ ಉಸಿರುಗಟ್ಟಿಸುತ್ತಾ
ಎತ್ತಲೆತ್ತಲೂ

ಕೂರಲೂ ನಿಲ್ಲಲೂ ಬಿಡದೇ
ಹಠ ಹಿಡಿದ ಮಗುವಿನಂತೆ
ಜೀವ ಹಿಂಡುತ್ತಿತ್ತು.
ಪ್ರೀತಿಯಿಂದ ಮೃದುವಾಗಿ
ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು
ಇಂಚಿಂಚೂ ವ್ಯಾಪಿಸುತ್ತಾ

ಅವಳು…..
ಆ ನೋವನ್ನು
ಪ್ರೀತಿಯಿಂದ ಆಪೋಷಿಸಿಬಿಟ್ಟಳು!

ಅದು ರಕ್ತದ ಕಣಕಣದಲ್ಲೂ
ಸೇರಿಹೋಯಿತು
ಕಣ್ಣಿನೊಳಗಿನ ನೋಟದಂತೆ

ಈಗ ಅವಳೊಳಗೆ
ನೋವು ಬೀಜವಾಗಿ ಊರಿ
ಮೆಲ್ಲಗೆ ಮೊಳಕೆಯೊಡೆದು
ನರನರಗಳನ್ನೂ ಬಳ್ಳಿಯಂತೆ
ಹೆಣೆದು ಬೀಗುವಾಗ
ಅವಳು ಫಲತುಂಬಿ

ಹಠಮಾರಿ ಕಂದನಿಗೆ ಊಡಿಸುತ್ತಾಳೆ.
ಮಡಿಲೊಳಗಿಟ್ಟು ಆಡಿಸುತ್ತಾಳೆ.
ಅರಿವೇ ಇಲ್ಲದೇ
ಅವಳೀಗ ತಾಯಾಗಿದ್ದಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಳೀಯತೆಯಿಂದ ಅಂತರ ರಾಷ್ಟ್ರೀಯತೆಗೆ…
Next post ಮನ ಮಂಥನ ಸಿರಿ – ೧

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys